ಹೊತ್ತು ಹೋಯಿತಲ್ಲಾ

 

ಹೊತ್ತು ಹೋಯಿತಲ್ಲಾ ಹರಿ ನಿನ್ನ ಭೃತ್ಯನಾಗಲಿಲ್ಲ  ।।ಪ।।

ಮತ್ತೆ ಮತ್ತೆ ಉನ್ಮತ್ತರ ಸಂಗದಿ 
ಉತ್ತಮರಿಗೆ ಕರವೆತ್ತಿ ಮುಗಿಯದಲೆ                                ||ಅ ಪ||

ಕುಜನರ ಬಳಿವಿಡಿದು ಸುಕರ್ಮವು ಯಜನಾದಿಗಳ ಜರಿದು |
ಭುಜಗಶಯನ ನಿನ್ನ ಭಜನೆಯ ಮಾಡುವ 
ಸುಜನರ ಚರಣಾಂಬುಜವನೆ ಪಿಡಿಯದೆ                            ।।ಹೊತ್ತು।।

ಜ್ಞಾನವಂತರ ಸಂಗ ಮಂದ ಜ್ಞಾನಿಗೇನೋ ರಂಗ |
ದೀನ ವಾತ್ಸಲ ನೀ ದೀನರಿಗಲ್ಲದಲೇ 
ಹೀನಗುಣದವನಿಗೇನು ಗತಿಯೋ ಕೃಷ್ಣಾ                              ।।ಹೊತ್ತು।।

ಪರಮಪುರುಷ ಹರಿಯೇ ಎನ್ನ ನೀ ಕರಪಿಡಿಯೋ ದೊರಿಯೇ |
ಅರಘಳಿಗ್ಯಾದರೂ ಗುರುಶ್ರೀಶ ವಿಠ್ಠಲನ
ಪರಮ ಪಾವನ ನಿನ್ನ ಚರಣವ ಸ್ಮರಿಸದೆ                            ।।ಹೊತ್ತು।।

 

Comments

Popular Posts