ಶ್ರೀನಿವಾಸ ನೀನೇ ಪಾಲಿಸೋ
ಶ್ರೀನಿವಾಸ ನೀನೇ ಪಾಲಿಸೋ ಶ್ರಿತಜನ ಪಾಲ
ಗಾನಲೋಲ ಶ್ರೀ ಮುಕುಂದನೇ || ಪ ||
ಧ್ಯಾನಮಾಳ್ಪ ಸಜ್ಜನರ ಮಾನದಿಂ ಪರಿಪಾಲಿಪ
ವೇಣುಗೋಪಾಲಾ ಗೋವಿಂದ ವೇದವೇದ್ಯ ನಿತ್ಯಾನಂದ ||ಅಪ||
ಎಂದಿಗೆ ನಿನ್ನಯ ಪಾದವ ಪೊಂದುವ ಸುಖ
ಎಂದಿಗೆ ಲಭ್ಯವೋ ಮಾಧವ |
ಅಂಧಕಾರಣ್ಯದಲ್ಲಿ ನಿಂದು ತತ್ತರಿಸುತಿಹೆನೊ
ಅಂದದಿಂ ಭವಾಬ್ದಿಯೊಳು ಬೆಂದು ನೊಂದೇನೊ ಮುಕುಂದ ||ಶ್ರೀನಿವಾಸ||
ಎಷ್ಟು ದಿನ ಕಷ್ಟ ಪಡುವುದೊ ಯಶೋದೆ ಕಂದ
ದೃಷ್ಟಿಯಿಂದ ನೋಡಲಾಗದೆ |
ಮುಟ್ಟಿ ನಿನ್ನ ಭಜಿಸಲಾರೆ ಕೆಟ್ಟ ನರಜನ್ಮದವ
ದುಷ್ಟ ಕಾರ್ಯ ಮಾಡಿದಾಗ್ಯು ಇಷ್ಟನಾಗಿ ಕೈಯಪಿಡಿದು ||ಶ್ರೀನಿವಾಸ||
ಅನಿದಿನ ಅನೇಕ ರೋಗಂಗಳಾ ಅನುಭವಿಸುವೆನು
ಘನ್ನ ಮಹಿಮ ನೀನೆ ಕೇಳೆಯಾ |
ತನುವಿನಲ್ಲಿ ಬಲವಿಲ್ಲ ನೆನೆದ ಮಾತ್ರ ಸಲಹುವ
ಹನುಮದೀಶ ಪುರನ್ದರ ವಿಠಲನೇ ಕೈಯ್ಯಾ ಪಿಡಿದು||ಶ್ರೀನಿವಾಸ||
Comments
Post a Comment